У нас вы можете посмотреть бесплатно ಪೆದ್ದೂರು ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಬ್ರಹ್ಮರಥೋತ್ಸವ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು. или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса savevideohd.ru
ಪೆದ್ದೂರಿನಲ್ಲಿ ಅದ್ದೂರಿಯಾಗಿ ನಡೆದ ಬ್ರಹ್ಮರಥೋತ್ಸವ* ಶ್ರೀ ಲಕ್ಷ್ಮಿ ವೆಂಕಟೇಶ್ವರ ಮತ್ತು ಶ್ರೀ ವೀರಾಂಜನೇಯ ಸ್ವಾಮಿಗಳ ಬ್ರಹ್ಮರಥೋತ್ಸವ ಚಿಂತಾಮಣಿ:ತಾಲೂಕಿನ ಮುರುಗಮಲ್ಲ ಹೋಬಳಿ ಪೆದ್ದೂರು ಗ್ರಾಮದಲ್ಲಿ ಇರುವ ಶ್ರೀ ಮಹಾಗಣಪತಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ಮತ್ತು ಶ್ರೀ ವೀರಾಂಜನೇಯ ಸ್ವಾಮಿಗಳ ಬ್ರಹ್ಮರಥೋತ್ಸವಗಳು ಇಂದು ಅದ್ದೂರಿಯಾಗಿ ನಡೆದವು. ದೇವಸ್ಥಾನದ ಆವರಣದಲ್ಲಿ ರಾಮಕೋಟೆ ಭಜನೆಯನ್ನು ಏರ್ಪಡಿಸಲಾಗಿದ್ದು ಭಜನೆ ನೋಡುಗರ ಗಮನ ಸೆಳೆಯಿತು. ಬ್ರಹ್ಮರಥೋತ್ಸವ ಹಾಗೂ ಜಾತ್ರೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಮಧ್ಯಾಹ್ನ 01:00 ಗಂಟೆಗೆ ಆರಂಭಗೊಂಡಿದ್ದ ಬ್ರಹ್ಮರಥೋತ್ಸದ ಅಂಗವಾಗಿ ಹಲವಾರು ಸಂಪ್ರಾದಾಯಗಳ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಬ್ರಹ್ಮರಥೋತ್ಸವಕ್ಕೆ ಮೂಲೆಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು. ಇದಕ್ಕೂ ಮೊದಲು ಶ್ರೀ ವೀರಾಂಜನೇಯ ಸ್ವಾಮಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ವಿವಿಧ ಪೂಜಿಗಳನ್ನು ಭಕ್ತರ ಸಮ್ಮುಖದಲ್ಲಿ ಸಲ್ಲಿಸಲಾಗಿತ್ತು.ಸಂಪ್ರದಾಯದಂತೆ ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು ಗೋವಿಂದ ಗೋವಿಂದ ಎನ್ನುವ ವೇದಘೋಕ್ಷಗಳೊಂದಿಗೆ ರಥ ಹಗ್ಗ ಹಿಡಿದು ಎಳೆಯುವ ತವಕದಿಂದ ದೇವರನ್ನು ಪ್ರಾರ್ಥನೆ ಮಾಡಿದರು. ಬ್ರಹ್ಮರಥೋತ್ಸವದ ತದನಂತರ ಪಾನಕ ಪೂಜಾ ವಸಂತೋತ್ಸವ, ಅನ್ನಸಂತರ್ಪಣೆ ಇತ್ತು. ಬ್ರಹ್ಮರಥೋತ್ಸವದಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ಸೇವಾ ಟ್ರಸ್ಟ್ ಗೌರವಾಧ್ಯಕ್ಷರು ಹಾಗೂ ವಕೀಲರಾದ ಎಸ್ ರಘುನಾಥಗೌಡ.ಶ್ಯಾಮಲಮ್ಮ. ಪ್ರಧಾನ ಕಾರ್ಯದರ್ಶಿ ವಿ ರಮೇಶ್. ಧರ್ಮದರ್ಶಿ ಸಿವಿ ಶ್ರೀನಿವಾಸ್ ಗೌಡ. ಈಶ್ವರ್ ಗೌಡ.ಪಾಪರೆಡ್ಡಿ.ಗೋಪಾಲ್ ರೆಡ್ಡಿ.ವಿನಯ್ ಗೌಡ. ವೇಣುಗೋಪಾಲ್ ಗೌಡ.ಮುಖ್ಯ ಅತಿಥಿಗಳಾಗಿ ಶ್ರೀ ರಾಜರಾಜೇಶ್ವರಿ ಲೋಹಿತೇಶ್ವರಿ.ಮಾರುತಿ ರೆಡ್ಡಿ. ದೇವಸ್ಥಾನ ಸಂಸ್ಥಾಪಕರಾದ ಶ್ರೀ ಶ್ರೀ ಶ್ರೀ ವೆಂಕಟಪ್ಪಸ್ವಾಮಿ.ವಕೀಲರಾದ ಬಿಕೆಎಸ್ ಸಂಜಯ್ ಕೃಷ್ಣಮೂರ್ತಿ. ವಿಜಯ ರಾವ್.ಮುನಿಯಪ್ಪ ಸಿ ಆರ್ ಗೌಡ.ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸ್ಥಳೀಯರು ಭಾಗವಹಿಸಿದ್ದರು.